Monday, March 9, 2020

ಮತ್ತೆ ಸೆಳೆಯುತಿದೇ ಅಂತರಾತ್ಮಾ..

ಮರಳಿ ಬಂದಿಹೆನು
ನೆರಳ ಕರೆಗೆ
ಮಡಿಲ ತುಂಬಿ
ಸಂತೈಸು ವನಸಿರಿಯೇ
ಮುಸ್ಸಂಜೆಯ ಹೊಂಗಿರಣ
ತಂಪಾದ ತಂಗಾಳಿ
ಇಂಪಾದ ಗಾನ
ನಾ ಇಲ್ಲೇ ಮಲಗಿ
ನಿದ್ರಿಸುವೇ
ಸಂತೈಸು ಬಾ  ಉಶೆ...
ನಿಶೆ ಸೆಳೆವ ಮುನ್ನ




  

Sunday, July 6, 2014

ಆತ್ಮ ಸುನಾದಕೆ ನಿತ್ಯ ನಿವೇದನೆ 




ಅಸಹಾಯಕತೆ ಅಗೋಚರ
ಶಕ್ತಿಯ ಬೆಂಬಲವ  ನಂಬಿ  
ನಡೆವ ದಾರಿ ಧೈರ್ಯಕೆ ಬುನಾದಿ
ಸಾವಿರ ಸಮಸ್ಯೆಯ ಸವಾಲಿನಲೂ
ದುತ್ತೆಂದು ಮನದೆದುರು  ದುಮುಕುವ
ಅಗೋಚರಿಯೇ ಸಹಚಾರಿ
ಎಲ್ಲನಿನ್ನ ಲೀಲೇ ಸಕಾರಕೂ ...!!!
ಎಂದುದ್ಘರಿಸಿ...... 
ನಕಾರಕೂ .. ನೀನಿತ್ತಂತಾಗಲೆಂದು
ನಿಟ್ಟುಸಿರಿಳಿಸಿ.....  
ಅದೃಶ್ಯ ಅಮೂರ್ತವೇ
ಅನಂತ ಆದಿಗೂ  ಅನಾದಿಗೂ
ಅಗೋಚರ ಅಂತಃ ಶಕ್ತಿ
ಸಾಧನಾಯುಕ್ತಿ
ಮನವ ಸಂತೈಸುವ ಮೂರ್ತ
ರೂಪ ಮುಂದಿರಿಸಿ
ಜ್ಯೋತಿ ಬೆಳಗಿಸಿ, ಪುಷ್ಪವಿರಿಸಿ 
ಗಂಧ ಪೂಸಿ
ಪರಿಮಳದ ಧೂಪ ಹರಿಸಿ,
ನೈವೇದ್ಯವಿರಿಸಿ
ಕರಜೋಡಿಸಿ, ಕಣ್ಮುಚ್ಚಿ
ಸರ್ವೇ ಜನಾಹ ಸುಖಿನೋ ಭವಂತು ,
ಸರ್ವ ಕಾರ್ಯ ಸಿದ್ಧಿರಸ್ತು ,
ಎಂದು ಸ್ಮರಿಸಿ, ಸಂತುಷ್ಟಿಯಲಿ  
ಸಾಂತ್ವನಗೊಳುತ ಸಕಲ ಜೀವಿ
ಸಾಗುವವು ಸಕಾರ್ಯಗಳಲಿ
ಸ್ಮರಿಸುವವು ಸಂಕಷ್ಟಗಳಲಿ  
ಆತ್ಮ ಸುನಾದಕೆ ನಿತ್ಯ ನಿವೇದಿಸಿ...
ನಡೆವವು ಬದುಕ ದಾರಿಯಲಿ

Wednesday, September 29, 2010

ನರನಿಗಿಂತ ನಾನೇನು ಕಡಿಮೆಯೇ .....?

 
 ಹಗಲ ಹೊಂಗಿರಣವೇ, ಆಗೊಂದು
 ಈಗೊಂದು ತುಸು ನಸು ನಗು ಬೀರಿ,
ಒಮ್ಮೆ ನಾಚಿ ಕೆಂಪಾಗಿ,ಮಂಕಾಗುವೆ,
ಅಂತು ಇಂತೂ ದಿನ ಸರಿಸಿ ಇರುಳಿಗೆ.
 
ಮತ್ತದೇ ಕಂಡೂಕಾಣದ ಹಗಲು ಹಗಲಲ್ಲ
ಮುಸ್ಸಂಜೆ, ಮೊದಲೇ ಅಲ್ಲ
ನಿನ್ನ ಸೆರೆಹಿಡಿದಿಡಬೇಕು ಇಲ್ಲೇ
ಕೈಗೆ ಸಿಗುವೆ ನೀನೆಲ್ಲಿ...?
 ಮರೆಯಾಗುವೆ ಮೋಡದೊಳಗೆ
 
ಆ ಮೋಡವೋ,ಅದು ನಿನ್ನಂತೆ ಚಂಚಲ
ಹಗಲು ಹೊಗೆಯಾಗಿ,ಇರುಳು ದಗೆಯಾಗಿ
ಒಮ್ಮೆ ಕೊರೆವ ಚಳಿಯಾಗಿ,ಮನಬಂದಂತೆ
ಹರಿದಾಕಾರದಲಿ,ಹೊರೆಹೊರೆಯಾಗಿ
ದೈತ್ಯಾಕಾರದಲಿ ದಾಂಧಲೆ ಮಂದಗತಿಯಲಿ
 
 ನುಗ್ಗಬೇಕು ಮಾನವು ನಿನ್ನೊಳಗೆ
ಕೋಪ ಭುಗಿಲ್ಲೆದ್ದರೆ,ಕರಗಿ ಕಣ್ತುಂಬಿ
 ದಳದಳನೆ ಕಣ್ಣೀರ ಧಾರೆಯೊಡನೆ
ಬೋರ್ಗರೆದು  ಆರ್ಭಟಿಸಿ ,ಜಟೆಯೋದರಿ
 ಬೆಂಕಿಯ ಮಿಂಚು ಹರಡಿ,
 
 ಶರಧಿ ವುಕ್ಕುಕ್ಕಿ ಪೂತ್ಕರಿಸಿ ,
 ಗಿಡ ಮರ ಜನ ಮನೆ ಬೆಳೆಎಲ್ಲವ
 ನುಂಗಿ ನುಗ್ಗುವೆ, ದ್ವ್ಹಂಸ ಮಾಡಿ  ಹಿಗ್ಗುವೆ,
         ಧುಮುಗುಡುತ ಒಮ್ಮೆಗೆ ಶಾಂತವಾಗಿ,
 ಅನಾಸಕ್ತಿ ತೋರುವೆ, ಅನಾವೃಷ್ಟಿ ಬೀರುವೆ
 
ತನ್ನಂತೆ ತಾ ಮೆರೆವ ನರಗೇನು
 ನಾ ಕಡಿಮೆ...ಎನುವುದೇ ನಿನ್ನ
 ವಾದವೇ ?ತಪ್ಪಿಲ್ಲ ಬಿಡು